Homeಕರ್ನಾಟಕಕೆಇಎ ಪರೀಕ್ಷಾ ಅಕ್ರಮ | ಪೊಲೀಸರ ಕಣ್ಣಿಗೆ ಮಣ್ಣೆರೆಚುತ್ತಿರುವ ಕಿಂಗ್ ಪಿನ್‌ ಆರ್‌ ಡಿ ಪಾಟೀಲ

ಕೆಇಎ ಪರೀಕ್ಷಾ ಅಕ್ರಮ | ಪೊಲೀಸರ ಕಣ್ಣಿಗೆ ಮಣ್ಣೆರೆಚುತ್ತಿರುವ ಕಿಂಗ್ ಪಿನ್‌ ಆರ್‌ ಡಿ ಪಾಟೀಲ

ಕೆಇಎ ಪರೀಕ್ಷೆಯಲ್ಲಿ ಅಕ್ರಮ ಎಸಗಿ, ತಲೆ ಮರೆಸಿಕೊಂಡಿರುವ ಪ್ರಕರಣದ ಕಿಂಗ್‌ ಪಿನ್ ಆರ್‌ ಡಿ ಪಾಟೀಲ್‌ನನ್ನು (ರುದ್ರಗೌಡ ಪಾಟೀಲ) ಪೊಲೀಸರು ಬಂಧಿಸಲು ಹರಸಾಹಸ ಪಡುತ್ತಿದ್ದಾರೆ.

ಬಂಧಿಸಲು ಬರುವ ಪೋಲಿಸರನ್ನು ದಿನ ದಿನ ಸಿನೆಮಾ ಶೈಲಿಯಲ್ಲಿ ಆರೋಪಿ ಆರ್‌ ಡಿ ಪಾಟೀಲ ಯಮಾರಿಸುತ್ತಿದ್ದಾನೆ. ಮಂಗಳವಾರ ಬಂಧಿಸಲು ಬಂದಿದ್ದ ಪೋಲಿಸರ ಕಣ್ಣು ತಪ್ಪಿಸಿ, ಕಾಂಪೌಂಡ್‌ ಜಿಗಿದು ಪರಾರಿಯಾಗಿದ್ದಾನೆ.

ಉತ್ತರ ಪ್ರದೇಶಕ್ಕೆ ಮೊಬೈಲ್‌ ರವಾಣೆ

ನೆರೆಯ ಮಹಾರಾಷ್ಟ್ರ, ತೆಲಂಗಾಣ ಅಥವಾ ಉತ್ತರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದಾನೆಂದು ಪೊಲೀಸರು ಊಹಿಸಿದ್ದರು. ಅದರಂತೆ ಕಿಂಗ್​ಪಿನ್​ ರುದ್ರಗೌಡ ಪಾಟೀಲ್​ನ ಮೊಬೈಲ್ ಲೋಕೇಷನ್​ ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದೆ. ಆದರೆ, ಟವರ್ ಲೋಕೆಷನ್ ಜಾಡು ಹಿಡಿದು ಹೊರಟಿದ್ದ ಪೊಲೀಸರಿಗೆ ರುದ್ರಗೌಡ ಚಳ್ಳೇಹಣ್ಣು ತಿನ್ನಿಸಲು ತನ್ನ ಫೋನ್ ಬೇರೊಬ್ಬರಿಗೆ ನೀಡಿ ಉತ್ತರ ಪ್ರದೇಶಕ್ಕೆ ಕಳುಹಿಸಿ ತಾನು ಕಲಬುರಗಿಯಲ್ಲೇ ತಲೆಮರಿಸಿಕೊಂಡಿದ್ದಾನೆ.

ರುದ್ರಗೌಡ ಪಾಟೀಲ್ ಕಲಬುರಗಿಯಲ್ಲೇ ಇರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆತನನನ್ನು ಬಂಧಿಸಲು ತಾನು ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಬಂದಿದ್ದಾರೆ. ಪೊಲೀಸರ ವಾಸನೆ ಕಂಡು ಹಿಡಿದ ಆರ್‌ ಡಿ ಪಾಟೀಲ ಕೆಲವೇ ಕ್ಷಣಗಳಲ್ಲಿ ಕಪೌಂಡ್ ಹಾರಿ ಕೂದಲೆಳೆ ಅಂತರದಲ್ಲಿ ಪೊಲೀಸರಿಂದ ಎಸ್ಕೇಪ್ ಆಗಿದ್ದಾನೆ.

ಆರೋಪಿ ರುದ್ರಗೌಡ ಪಾಟೀಲ್ ಬಂಧನಕ್ಕೆ ಹುಡುಕಾಟ ಮುಂದುವರಿದಿದೆ. ನಾಲ್ಕು ವಿಶೇಷ ತಂಡಗಳು ಕಲಬುರಗಿ ಜಿಲ್ಲೆಯ ವಿವಿಧಡೆ ಮತ್ತು ಮಹಾರಾಷ್ಟ್ರ ಹಲವೆಡೆ ಹುಡುಕಾಟ ನಡೆಸುತ್ತಿವೆ. ಮಹಾರಾಷ್ಟ್ರದ ಸೊಲ್ಹಾಪುರ, ಪುಣೆಯಲ್ಲಿ ರುದ್ರಗೌಡ ಅಡಗಿರುವ ಶಂಕೆ ವ್ಯಕ್ತವಾಗಿದೆ.

ಪಿಎಸ್‌ಐ ಪರೀಕ್ಷಾ ಅಕ್ರಮದಲ್ಲೂ ಹೀಗೆ ನಡೆದುಕೊಂಡಿದ್ದ

ಪಿಎಸ್‌ಐ ಪರೀಕ್ಷಾ ಅಕ್ರಮದಲ್ಲೂ ಹೀಗೆ ಸಿಐಡಿ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿಣ್ಣಿಸಿದ್ದ. ಕೊನೆಗೆ ಸಿನೆಮಾ ಶೈಲಿಯಲ್ಲಿ ಸಿಐಡಿ ಅಧಿಕಾರಿಗಳು ದಾಳಿ ಮಾಡಿ, ಸಾಕ್ಷಿ ಸಮೇತ ಬಂಧಿಸಿದ್ದರು. 11 ತಿಂಗಳು ಜೈಲಿನಲ್ಲಿದ್ದ ರುದ್ರಗೌಡ ಪಾಟೀಲ ಷರತ್ತುಬದ್ಧ ಜಾಮೀನಿನ ಮೇಲೆ ಹೊರಗೆ ಬಂದಿದ್ದಾನೆ.

ಪಿಎಸ್‌ಐ ಪ್ರಕರಣದಲ್ಲಿ ಪಾಠ ಕಲಿಯದ ರುದ್ರಗೌಡ ಪಾಟೀಲ ತನ್ನ ಹಳೆಯ ಚಾಲಿಯನ್ನೇ ಮುಂದುವರಿಸಿ, ಕಳೆದ ತಿಂಗಳ ಅಕ್ಟೋಬರ್ 28 ರಂದು ನಡೆದಿದ್ದ ಕೆಇಎ ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದ ರುದ್ರಗೌಡ ಪಾಟೀಲ್ ಅನೇಕ ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ಬಂದಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments