Homeಕರ್ನಾಟಕಸಿದ್ದರಾಮಯ್ಯ ನಮ್ಮ ಅಭಿಪ್ರಾಯಕ್ಕೆ ಎಲ್ಲಿ ಮನ್ನಣೆ ಕೊಡುತ್ತಾರೆ: ಶಾಮನೂರು

ಸಿದ್ದರಾಮಯ್ಯ ನಮ್ಮ ಅಭಿಪ್ರಾಯಕ್ಕೆ ಎಲ್ಲಿ ಮನ್ನಣೆ ಕೊಡುತ್ತಾರೆ: ಶಾಮನೂರು

ಸಿಎಂ ಸಿದ್ದರಾಮಯ್ಯ ಅವರು ಎಲ್ಲಿ ನಮ್ಮ ಮಾತು ಕೇಳುತ್ತಾರೆ? ಜಾತಿಗಣತಿಯನ್ನು ಸರ್ಕಾರ ಸ್ವೀಕರಿಸಿದ್ದು ತಪ್ಪು ಅಲ್ಲ. ಆದರೆ ಅದು ವೈಜ್ಞಾನಿಕವಾಗಿರಬೇಕು. ಲಿಂಗಾಯತ ಸಮುದಾಯದಲ್ಲಿ ಸಾಕಷ್ಟು ಉಪಪಂಗಡಗಳು ಇವೆ. ನಮ್ಮ ಸಮುದಾಯದ ಜನಸಂಖ್ಯೆ ಕಡಿಮೆ ತೋರಿಸಿರುವ ಮಾಹಿತಿ ಇದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಸರ್ಕಾರ ಸ್ವೀಕರಿಸಿರುವ ಜಾತಿ ಗಣತಿ ವರದಿ ವೈಜ್ಞಾನಿಕವಾಗಿ ಇಲ್ಲ. ಹೇಗೆ ಅವೈಜ್ಞಾನಿಕವಾಗಿದೆ ಎಂಬುದನ್ನು ಸಾಬೀತುಪಡಿಸಿ ತೋರಿಸುತ್ತೇವೆ” ಎಂದರು.

“ಆಯೋಗದ ಅಧ್ಯಕ್ಷರು ನಮ್ಮ ವರದಿ ವೈಜ್ಞಾನಿಕವಾಗಿ ಇದೆ ಎನ್ನುತ್ತಾರೆ. ಆದರೆ, ಅದು ಹೇಗೆ ಅವೈಜ್ಞಾನಿಕವಾಗಿದೆ ಎಂಬುದನ್ನು ಸಾಬೀತು ಮಾಡುತ್ತೇವೆ. 9 ವರ್ಷದ ಹಿಂದಿನ ಸರ್ವೆಯನ್ನು ಈಗ ವರದಿ ಸಲ್ಲಿಸಲಾಗಿದೆ” ಎಂದರು.

“ಮನೆಯಲ್ಲೇ ಕುಳಿತು ಜಾತಿಗಣತಿ ವರದಿ ತಯಾರಿಸಿದ ಮಾಹಿತಿ ಇದೆ. ಸರ್ಕಾರ ಮತ್ತೊಮ್ಮೆ ವೈಜ್ಞಾನಿಕವಾಗಿ ಜಾತಿಗಣತಿ ನಡೆಸಬೇಕು. ಈಗ ಸ್ವೀಕರಿಸಿರುವ ಜಾತಿ ಗಣತಿ ವರದಿಯನ್ನು ಸರ್ಕಾರ ಏನು ಮಾಡುತ್ತದೆ ಎಂದು ನೋಡುತ್ತೇವೆ. ನಾವು ಸುಮ್ಮನೆ ಕೂರುವುದಿಲ್ಲ” ಎಂದು ಹೇಳಿದರು.

9 ವರ್ಷದ ಹಳೆಯದು ಬೇಡ. ವೈಜ್ಞಾನಿಕವಾಗಿ ಇನ್ನೊಮ್ಮೆ ಜಾತಿ ಗಣತಿ ಮಾಡಬೇಕು. ಕಾಂತರಾಜು ವರದಿಯನ್ನು ಈಗ ಅವರು ತಂದುಕೊಟ್ಟಿದ್ದಾರೆ. ನಮ್ಮ ಜನಸಂಖ್ಯೆ ಎರಡು ಕೋಟಿಗೂ ಹೆಚ್ಚಿದೆ. ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆ. ಈ ವರದಿಯನ್ನು ಮೂಲೆಗೆ ಹಾಕುವುದೇ ಒಳ್ಳೆಯದು” ಎಂದು ತಿಳಿಸಿದರು.

ಜಾತಿ ಗಣತಿ ವರದಿ ಸ್ವೀಕಾರದಿಂದ ಕಾಂಗ್ರೆಸ್​​ಗೆ ಸಮಸ್ಯೆ ಆಗಲಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ನಾನು ಈಗ ಏನನ್ನೂ ಕೂಲಂಕಷವಾಗಿ ಹೇಳಲು ಹೋಗುವುದಿಲ್ಲ. ಸಿಎಂ ಸಿದ್ದರಾಮಯ್ಯ ನಮ್ಮ ಅಭಿಪ್ರಾಯಗಳಿಗೆ ಎಲ್ಲಿ ಮನ್ನಣೆ ಕೊಡುತ್ತಾರೆ. ಈ ವರದಿಯಿಂದ ಜಾತಿ ಜಾತಿಗಳ ನಡುವೆ ಸಂಘರ್ಷ ಆಗುತ್ತದೆ. ಜಾತಿ ಜಾತಿಗಳ ನಡುವೆ ಅವರು ಛೂ ಬಿಡ್ತಿದ್ದಾರೆ. ನಾವು ಎಸ್​​ಸಿ ಎಸ್​ಟಿ ವಿರುದ್ಧವಿಲ್ಲ. ಆದರೆ ನಮ್ಮ ಸಂಖ್ಯೆ ಡಬಲ್ ಇದೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments