ಜಮೀರ್ ಅಹಮದ್ ಖಾನ್ ಗೌರವಕ್ಕೆ ಧಕ್ಕೆ ತರುವ ಹಾಗೂ ಮಾನ ಹಾನಿಕರ ಸುದ್ದಿ ಪ್ರಸಾರ, ಪ್ರಕಟಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ದಾವಣಗೆರೆ ಉಪ ಚುನಾವಣೆ ವಿಚಾರದಲ್ಲಿ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಮಾನ ಹಾನಿಕರ ಸುದ್ದಿ, ಲೇಖನ, ಆಡಿಯೋ ವಿಡಿಯೋ, ಚಿತ್ರ ಗಳನ್ನು ಮುದ್ರಣ, ವಿದ್ಯುನ್ಮಾನ, ಸಾಮಾಜಿಕ ಜಾಲ ತಾಣ, ಡಿಜಿಟಲ್, ಆನ್ ಲೈನ್, ವೆಬ್ ಪೋರ್ಟಲ್, ವಾಟ್ಸ್ ಆಪ್ ಸೇರಿದಂತೆ ಯಾವುದೇ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ, ಅಪ್ ಲೋಡ್, ಪೋಸ್ಟ್, ಮರು ಪೋಸ್ಟ್ ಮಾಡದಂತೆ 57ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯ (ಸಿಸಿಎಚ್-58) ಮೇಯೋ ಹಾಲ್) ಮಧ್ಯಂತರ ನಿರ್ಬಂಧಕಾದೇಶ (ತಡೆಯಾಜ್ಞೆ) ನೀಡಿದೆ.


