Homeಕರ್ನಾಟಕವಿದ್ಯಾರ್ಥಿಗಳ ಆಹಾರದಲ್ಲಿ ಮಲ; ನಾಲ್ಕು ತಿಂಗಳಾದರೂ ಕ್ರಮವಿಲ್ಲ: ಆರ್‌ ಅಶೋಕ ಕಿಡಿ

ವಿದ್ಯಾರ್ಥಿಗಳ ಆಹಾರದಲ್ಲಿ ಮಲ; ನಾಲ್ಕು ತಿಂಗಳಾದರೂ ಕ್ರಮವಿಲ್ಲ: ಆರ್‌ ಅಶೋಕ ಕಿಡಿ

ಚಿಂತಾಮಣಿಯ ಸರ್ಕಾರಿ ಬಾಲಕರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಆಹಾರದಲ್ಲಿ ಮಲ ಬೆರೆತಿರುವ ಪ್ರಕರಣ ನೆನೆಸಿಕೊಂಡರೆ ಕರುಳು ಕಿತ್ತು ಬರುತ್ತಿದೆ. ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಲಜ್ಜೆಗೇಡಿತನಕ್ಕೆ ಸಾಕ್ಷಿ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್‌ ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಅವರು ಎಕ್ಸ್‌ ತಾಣದಲ್ಲಿ ಲ್ಯಾಬ್‌ ರಿಪೋರ್ಟ್‌ ಹಂಚಿಕೊಂಡು ಪೋಸ್ಟ್‌ ಮಾಡಿ, “ಪ್ರಕರಣದ ಲ್ಯಾಬ್ ವರದಿ ಆಗಸ್ಟ್ ತಿಂಗಿಳಿನಲ್ಲೇ ಬಂದಿದ್ದರು, 4 ತಿಂಗಳಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಎಷ್ಟು ಲಜ್ಜೆಗೆಟ್ಟಿರಬಹುದು” ಎಂದು ವಾಗ್ದಾಳಿ ನಡೆಸಿದ್ದಾರೆ.

“ಬಾಬಾಸಾಹೇಬ್ ಅಂಬೇಡ್ಕರ್ ಅವರು ಇಂದು ಬದುಕಿದ್ದಿದ್ದರೆ ಈ ದಲಿತ ವಿರೋಧಿ ಸರ್ಕಾರವನ್ನು ನೋಡಿ ಬಹುಶಃ ಕಣ್ಣೀರಿಡುತ್ತಿದ್ದರು ಅಲ್ಲವೇ ಸಚಿವ ಹೆಚ್‌ ಸಿ ಮಹದೇವಪ್ಪ ಅವರೇ” ಎಂದು ಅಶೋಕ ಪ್ರಶ್ನಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments