Homeಕರ್ನಾಟಕಬಿಜೆಪಿಗರು ಮುಷ್ಕರ ಮಾಡುವ ನೈತಿಕತೆ ಕಳೆದುಕೊಂಡು ಬಹುಕಾಲವಾಗಿದೆ: ಹೆಚ್ ಸಿ ಮಹದೇವಪ್ಪ

ಬಿಜೆಪಿಗರು ಮುಷ್ಕರ ಮಾಡುವ ನೈತಿಕತೆ ಕಳೆದುಕೊಂಡು ಬಹುಕಾಲವಾಗಿದೆ: ಹೆಚ್ ಸಿ ಮಹದೇವಪ್ಪ

ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಸಮುದಾಯದ ಜನರ ಅನುದಾನ ಬಳಕೆಯ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿಗರು ಹೋರಾಟ ನಡೆಸುವುದಾಗಿ ಹೇಳಿರುವುದು ಅತ್ಯಂತ ಹಾಸ್ಯಾಸ್ಪದವಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ.

“SCSP/TSP ಕಾಯ್ದೆಯ ನಿಯಮಾವಳಿಗೆ ಅನುಗುಣವಾಗಿ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಸಮುದಾಯದ ಜನರ ಕನಿಷ್ಟ ಬದುಕಿನ ಭದ್ರತೆಗಾಗಿ ಪಂಚ ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ ಅವರಿಗೆ ಭರವಸೆಯನ್ನು ಕಲ್ಪಿಸುವ ಕೆಲಸ ಮಾಡಿದೆ. ಸರ್ಕಾರದ ಈ ದೂರದೃಷ್ಟಿಯ ಫಲವಾಗಿಯೇ ಇಂದು ತಲಾದಾಯದಲ್ಲಿ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಂಡಿದೆ” ಎಂದು ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.

“ಕೆಲವು ಸಾಮಾಜಿಕ ತಜ್ಞರ ಅಭಿಪ್ರಾಯದಂತೆ ಸದಾ ಶೊಷಣೆಗಾಗಿ ಒಳಗಾಗಿ ತೊಂದರೆ ಅನುಭವಿಸುತ್ತಿದ್ದ ಪರಿಶಿಷ್ಟ ಸಮುದಾಯಗಳ ಪ್ರಾಥಮಿಕ ಬದುಕಿನಲ್ಲೂ ಕೂಡಾ ಸಾಕಷ್ಟು ಸುಧಾರಣೆಗಳು ಆಗಿದೆ.
ಹೀಗಿರುವಾಗ ನಿಯಮಾವಳಿಗಳ ಅನುಸಾರ ಪರಿಶಿಷ್ಟ ಸಮುದಾಯಗಳ ಬದುಕು ಹಸನಾಗುವ ಉದ್ದೇಶದಿಂದ ಹಣ ಖರ್ಚು ಮಾಡಿದರೆ ಅದಕ್ಕೂ ಅಪಸ್ವರ ತೆಗೆಯುವ ಬಿಜೆಪಿಗರು ನೈತಿಕವಾಗಿ ಎಷ್ಟು ದಿವಾಳಿ ಆಗಿದ್ದಾರೆ ಮತ್ತು ಎಷ್ಟೊಂದು ಅಮಾನವೀಯತೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಅವರ ಈ ನಡವಳಿಕೆಯೇ ಸಾಕ್ಷಿ” ಎಂದಿದ್ದಾರೆ.

“ಈ ಹಿಂದಿನ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಗರು ಪರಿಶಿಷ್ಟ ಸಮುದಾಯಗಳ ವಿರೋಧಿಯಾದ ನಡವಳಿಕೆಯನ್ನೇ ತೋರಿದರು. SCSP/TSP ಕಾಯ್ದೆಯ ಪರಿಮಿತಿಯಿಂದ ಆಚೆಗೆ ನಿಯಮಕ್ಕೆ ವಿರುದ್ಧವಾಗಿ SCSP ಯೋಜನೆಯನ್ನು ಬಳಸಿದ್ದ ಇವರು, ಒಳ ಮೀಸಲಾತಿಯ ಪ್ರಸ್ತಾಪವನ್ನು ಅಪ್ಪಿ ತಪ್ಪಿಯೂ ಸದನದಲ್ಲಿ ಮಾತನಾಡಲಿಲ್ಲ. ಈಗ ದೊಡ್ಡದಾಗಿ ಭಾಷಣ ಮಾಡುತ್ತಿರುವ ಬಿಜೆಪಿಯ ಸಂಸದ ಎ.ನಾರಾಯಣಸ್ವಾಮಿ ಅವರು ಸಂಸತ್ ನಲ್ಲೇ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಬರುವುದಿಲ್ಲ ಎಂದಿದ್ದರು. ಇನ್ನು ಸಚಿವ ಗೋವಿಂದ ಕಾರಜೋಳ ಅವರು ಸದಾಶಿವ ಆಯೋಗದ ವರದಿ ಒಂದು ಮುಗಿದ ಅಧ್ಯಾಯ ಎಂದಿದ್ದರು. ಅಧಿಕಾರ ಇದ್ದಾಗ ಇಂತಹ ಬೇಜವಾಬ್ದಾರಿ ಮಾತುಗಳನ್ನು ಆಡಿ ಈಗ ವರದಿಯ ಆಧಾರದ ಮೇಲೆ ಒಳ ಮೀಸಲಾತಿ ಜಾರಿ ಮಾಡುವ ಬದ್ಧತೆಯನ್ನು ತೋರಿಸುತ್ತಿರುವ ನಮ್ಮ ಸರ್ಕಾರದ ವಿರುದ್ಧ ಬಿಜೆಪಿಗರು ಮಾಡುತ್ತಿರುವ ಟೀಕೆಯು ಬೇಜವಾಬ್ದಾರಿತನದ ಸಂಕೇತವಾಗಿದೆ” ಎಂದು ಹೇಳಿದ್ದಾರೆ.

ಇ”ನ್ನು ಕೇಂದ್ರ ಸರ್ಕಾರದ ಭಾಗವಾಗಿದ್ದ ಎ ನಾರಾಯಣಸ್ವಾಮಿ ಮತ್ತು ಕಾರಜೋಳ ಅವರು ಆಡಿದ ಮಾತುಗಳು ಕೇವಲ ಅವರ ಮಾತಾಗಿರದೇ ಅದು ಬಿಜೆಪಿಯ ಮಾತಿನ ಕನ್ನಡಿಯಾಗಿತ್ತು. ಹೀಗಿರುವಾಗ ಮೂಲತಃ ಬಡವರ ವಿರೋಧಿಗಳು ಮತ್ತು ಶೋಷಿತ ಸಮುದಾಯಗಳ ವಿರೋಧಿಗಳಾದ ಬಿಜೆಪಿಗರು ತಮ್ಮ ಜನ ವಿರೋಧಿ ಮನಸ್ಥಿಗಾಗಿ ಜನ ಸಾಮಾನ್ಯರಲ್ಲಿ ಎಷ್ಟು ಬಾರಿ ಕ್ಷಮೆ ಕೇಳಿದರೂ ಸಾಲದು” ಎಂದಿದ್ದಾರೆ.

“ನ್ಯಾಯದ ಸಾಕಾರಕ್ಕಾಗಿ ಕೆಲಸ ಮಾಡುತ್ತಿರುವ ನಮ್ಮ ಸರ್ಕಾರದ ಬದ್ಧತೆಯು ಹೆಚ್ಚು ಸ್ಪಷ್ಟತೆಯಿಂದ ಕೂಡಿದ್ದು ಬಡವರು ಮತ್ತು ಶೋಷಿತರ ಪರವಾದ ನಿರ್ಧಾರಗಳಲ್ಲಿ ಯಾವುದೇ ರಾಜಿಯಿಲ್ಲದೇ ಕೆಲಸ ಮಾಡುತ್ತದೆ ಎಂದು ಈ ಸಂದರ್ಭದಲ್ಲಿ ಗರ್ವದಿಂದ ಹೇಳಲು ಬಯಸುತ್ತೇನೆ” ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments