HomeUncategorized'ಆಪರೇಷನ್‌ ಸಿಂಧೂರ' ಕಾರ್ಯಾಚರಣೆ ಯಶಸ್ಸು ಭಾರತೀಯ ಸೈನ್ಯಕ್ಕೆ ಸಲ್ಲುತ್ತೆ: ಸಿದ್ದರಾಮಯ್ಯ

‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆ ಯಶಸ್ಸು ಭಾರತೀಯ ಸೈನ್ಯಕ್ಕೆ ಸಲ್ಲುತ್ತೆ: ಸಿದ್ದರಾಮಯ್ಯ

‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಯ ಪೂರ್ಣ ಯಶಸ್ಸು ಭಾರತೀಯ ಸೈನ್ಯಕ್ಕೆ ಸಲ್ಲಬೇಕು. ಯಾವುದೇ ರಾಜಕೀಯ ಪಕ್ಷಕ್ಕೆ ಅದರ ಕ್ರೇಡಿಟ್‌ ಸಲ್ಲಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಎಚ್‌ ಡಿ ಕೋಟೆಯ ತಾಲ್ಲೂಕು ಕ್ರೀಡಾಂಗಣದ ಹೆಲಿಪ್ಯಾಡ್‌ನಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಕದನ ವಿರಾಮ ಎರಡೂ ದೇಶಗಳು ಒಪ್ಪಿಕೊಂಡಿವೆ. ಇಂಧಿನ ಸಭೆಯಲ್ಲಿ ಏನು ತೀರ್ಮಾನ ಆಗುತ್ತದೆ ನೋಡೋಣ” ಎಂದರು.

“ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ಸಭೆ ಕರೆಯಬೇಕಿತ್ತು. ಜೊತೆಗೆ ಪಾರ್ಲಿಮೆಂಟ್‌ ಸಹ ಕರೆಯಬೇಕಿತ್ತು. ಅದ್ಯಾವುದು ಅವರಿಂದ ಆಗಲಿಲ್ಲ” ಎಂದು ಹೇಳಿದರು.

“ಮೈಸೂರಿನಲ್ಲಿ ಮೂರು ಜನ ಮಕ್ಕಳನ್ನು ಬಿಟ್ಟರೆ ಉಳಿದವರೆಲ್ಲರೂ ಪಾಕಿಸ್ತಾನಕ್ಕೆ ಹೋಗಿದ್ದಾರೆ. ಮೈಸೂರಿನಲ್ಲಿರುವ ಮಕ್ಕಳು 6 ವರ್ಷದ ಕೆಳಗಿನ ಮಕ್ಕಳು. ಅವರ ತಾಯಿ ಭಾರತೀಯ ಹೆಣ್ಣು ಮಗಳು. ಗಂಡ ಪಾಕಿಸ್ತಾನದವರು. ಗಡಿವರೆಗೂ ಹೋದರೂ ಅವರನ್ನು ಯಾರೂ ಕರೆದುಕೊಂಡು ಹೋಗಲು ಬರದಿರುವ ಕಾರಣ ಮತ್ತೆ ಮರಳಿದ್ದಾರೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments