ನಾನು ಬಹಳ ಕ್ಲಿಯರ್ ಆಗಿದ್ದೇನೆ. ಮುಡಾ ಹಗರಣದಲ್ಲಿ ನಂದಾಗಲಿ ಅಥವಾ ಮುಖ್ಯಮಂತ್ರಿಗಳ ಪತ್ನಿಯವರದ್ದಾಗಲಿ ಪಾತ್ರ ಇಲ್ಲ. ಆ ರೀತಿ ಪಾತ್ರ ಇಲ್ಲ ಅಂತಾನೇ ಒಪ್ಪಿಕೊಂಡು ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ಕೊಟ್ಟಿದೆ ಎಂದು ಸಚಿವ ಬೈರತಿ ಸುರೇಶ್ ಹೇಳಿದರು.
ಇ.ಡಿ ನೋಟಿಸ್ಗೆ ಮಧ್ಯಂತರ ತಡೆ ವಿಚಾರವಾಗಿ ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, “ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಮೂರ್ತಿಗಳು ಕೇಸ್ ಮುಂದಕ್ಕೆ ಹಾಕಿದ್ದಾರೆ. 10ನೇ ತಾರೀಕು ಆದ ಮೇಲೆ ನೋಡೋಣ” ಎಂದರು.
“ನ್ಯಾಯಾಂಗದ ಮೇಲೆ ಸಂವಿಧಾನದ ಮೇಲೆ ನಾನು ಕಾಂಗ್ರೆಸ್ ಪಕ್ಷ ನಂಬಿಕೆ ಇಟ್ಟುಕೊಂಡಿದೆ. ನ್ಯಾಯಾಲಯದ ಆದೇಶವನ್ನು ನಾವು ಪಾಲಿಸುತ್ತೇವೆ. ಇ.ಡಿ ಅವರು, ಸಿಬಿಐ ಅವರನ್ನೇ ಕೇಳಬೇಕು ಯಾಕೆ ನೋಟಿಸ್ ಕೊಟ್ಟರು ಅಂತ. ನನಗೆ ನೋಟಿಸ್ ಬಂದಾಗ ಆಶ್ಚರ್ಯ ಆಯ್ತು” ಎಂದು ಹೇಳಿದರು.
“ಹಗರಣ ನಡೆದಾಗ ನಾನು ಮಂತ್ರಿನೂ ಅಲ್ಲ ಸೈಟನ್ನು ಪಡೆದಿಲ್ಲ. ಯಾರಿಗೂ ಸೈಟನ್ನು ಕೊಟ್ಟೂ ಇಲ್ಲ. ಸೈಟ್ ಹಂಚಿಕೆ ಗೊಂದಲ ಆದ ಮೇಲೆ ಸೈಟ್ ವಾಪಸ್ ಕೂಡ ಕೊಟ್ಟಿದ್ದಾರೆ. ಇದೆಲ್ಲ ನ್ಯಾಯಮೂರ್ತಿಗಳಿಗೆ ಮನದಟ್ಟಾಗಿದೆ. ಹಾಗಾಗಿ ಸ್ಟೇ ಕೊಟ್ಟಿದ್ದಾರೆ” ಎಂದು ತಿಳಿಸಿದರು.