ಕೋಲಾರ: ಅನೈತಿಕ ಸಂಬಂಧದ ಹಿನ್ನೆಯಲ್ಲಿ ನರಸಾಪುರದ ಸ್ವಾತಿ ಹೋಟೆಲ್ ಸಮೀಪವೇ ನರಸಾಪುರ ಗ್ರಾಮದ ಯಲ್ಲೇಶ್ (48) ಎಂಬಾತನನ್ನ ಯುವಕರ ಗುಂಪೊಂದು ಮಾರಕಾಸ್ರ್ತಗಳಿಂದ ಕೊಚ್ಟಿ ಕೊಲೆ ಮಾಡಲಾಗಿದೆ.
ಸಾವನ್ನಪ್ಪಿರುವ ಯಲ್ಲೇಶ ಈ ಹಿಂದೆ ಪ್ರೀತಿಸಿದಳೊಂದಿಗೆ ವಿವಾಹವಾಗಿ ಆಕೆಯನ್ನು ತೊರೆದಿದ್ದನಲ್ಲದೇ ಈ ಹಿಂದೆ ನರಸಾಪುರದಲ್ಲೇ ಹೋಟೆಲ್ ವೊಂದನ್ನ ನಡೆಸುತ್ತಿದ್ದ ಎರಡು ಮಕ್ಕಳ ತಾಯಿ ರೇಣುಕಾ ಎಂಬಾಕೆಯೊಂದಿಗೆ ರಾಷ್ರ್ಟೀಯ ಹೆದ್ಧಾರಿ ರಸ್ತೆಯಲ್ಲಿರುವ ಸ್ವಾತಿ ಹೋಟೆಲ್ ಸಮೀಪದ ಒಂಟಿ ಮನೆಯೊಂದರಲ್ಲಿ ಆಕೆಯೊಂದಿಗಿದ್ದ ಎನ್ನಲಾಗಿದೆ.
ಮಂಗಳವಾರ ರಾತ್ರಿ ಸುಮಾರು ಎಂಟೆ ಗಂಟೆ ಸಮಯದಲ್ಲಿ ಯಲ್ಲೇಶ್ ಮನೆಯತ್ತ ಹೋಗುತ್ತಿದ್ದಾಗ ರೇಣುಕಾಳ ಮಗ ಆತನ ಸಹಚರರೊಂದಿಗೆ ಯಲ್ಲೇಶನನ್ನ ಅಡ್ಡಗಟ್ಟಿ ಮೊಚ್ಚು ಮತ್ತು ಲಾಂಗುಗಳಿಂದ ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಧಾವಿಸಿ ರೇಣುಕಾಳ ಮಗ ಸೇರಿದಂತೆ ಒಂದಷ್ಟು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


