Homeಕರ್ನಾಟಕಆರ್ಥಿಕ ನೆರವು ಕೋರಿ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಂದ ಸರ್ಕಾರಕ್ಕೆ ಪ್ರಸ್ತಾವನೆ

ಆರ್ಥಿಕ ನೆರವು ಕೋರಿ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಂದ ಸರ್ಕಾರಕ್ಕೆ ಪ್ರಸ್ತಾವನೆ

ಕಳೆದ ತಿಂಗಳುಗಳಿಂದ ನೌಕರರ ಭವಿಷ್ಯ ನಿಧಿ ಪಾವತಿಸುವಲ್ಲೂ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಆರ್ಥಿಕ ನೆರವು ನೀಡುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ.

ಭವಿಷ್ಯ ನಿಧಿ ಕಾಯ್ದೆ ಪ್ರಕಾರ ಪ್ರತಿ ತಿಂಗಳು ನೌಕರರ ವೇತನದಲ್ಲಿ ಭವಿಷ್ಯ ನಿಧಿ ಮೊತ್ತ ಕಡಿತಗೊಳಿಸುವುದು ಹಾಗೂ ಉದ್ಯೋಗದಾತರು ಅದಕ್ಕೆ ಸಮಾನವಾದ ಮೊತ್ತವನ್ನು ನೌಕರರ ಭವಿಷ್ಯ ನಿಧಿಖಾತೆಗೆ ಪಾವತಿಸಬೇಕಿದೆ.
ಆದರೆ, ನೌಕರರ ವೇತನದಿಂದ ಕಡಿತಗೊಳಿಸಿದ ಮತ್ತು ತಮ್ಮ ಪಾಲವನ್ನು ಭವಿಷ್ಯ ನಿಧಿ ನ್ಯಾಸಕ್ಕೆ ಪಾವತಿಸುವಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು ವಿಫಲವಾಗಿವೆ.

ನಾಲ್ಕೂ ನಿಗಮಗಳು ಭವಿಷ್ಯ ನಿಧಿ ನ್ಯಾಸಕ್ಕೆ ಭವಿಷ್ಯ ನಿಧಿ ಬಾಕಿ ಹಾಗೂ ವಿಳಂಬ ಬಡ್ಡಿ, ಬಡ್ಡಿ ಸೇರಿದಂತೆ 2024ರ ಅಕ್ಟೋಬರ್‌ವರೆಗೆ 2,792.61 ಕೋಟಿ ರೂ. ಪಾವತಿಸುವುದು ಬಾಕಿ ಉಳಿದಿದೆ. ಈ ಮೊತ್ತ ಪಾವತಿಸಲು ತಮಗೇ ಸಾಧ್ಯವೇ ಇಲ್ಲ ಎಂದು ಹೇಳಿರುವ ನಿಗಮಗಳು, ಅದಕ್ಕಾಗಿ ಸರ್ಕಾರದಿಂದ ಆರ್ಥಿಕ ನೆರವು ನೀಡುವಂತೆ ಪತ್ರದ ಮೂಲಕ ಕೋರಿವೆ.

523.52 ಕೋಟಿ ಬಡ್ಡಿ

ರಾಜ್ಯ ರಸ್ತೆ ಸಾರಿಗೆ ನಿಗಮಗಳ ಲೆಕ್ಕದಂತೆ ಒಟ್ಟು 2,269.09 ಕೋಟಿ ರೂ. ಭವಿಷ್ಯ ನಿಧಿ ಬಾಕಿ ಉಳಿಸಿಕೊಂಡಿವೆ. ಅಲ್ಲದೆ, ಹೀಗೆ ನಿಗದಿತ ಸಮಯದಲ್ಲಿ ಭವಿಷ್ಯ ನಿಧಿ ಪಾವತಿಸದೆ ವಿಳಂಬ ಮಾಡಿದ್ದಕ್ಕಾಗಿ 523.52 ಕೋಟಿ ರೂ. ಹೆಚ್ಚುವರಿ ಬಡ್ಡಿ ರೂಪದಲ್ಲಿ ಪಾವತಿಸಬೇಕಿದೆ.

ಅದರಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು 2021ರ ಸೆಪ್ಟೆಂಬರ್‌ನಿಂದ 2024ರ ಅಕ್ಟೋಬರ್ ವರೆಗೆ ಸತತ 3 ವರ್ಷಗಳ ಕಾಲ ಭವಿಷ್ಯ ನಿಧಿ ಮೊತ್ತ ಪಾವತಿಸಿಲ್ಲ. ಹೀಗಾಗಿ 821.48 ಕೋಟಿ ರೂ. ಭವಿಷ್ಯ ನಿಧಿ ಬಾಕಿಗೆ 232.9 ಕೋಟಿ ರೂ. ವಿಳಂಬ ಬಡ್ಡಿ ಪಾವತಿಸಬೇಕಾಗಿದೆ.

ಇತರ ವೆಚ್ಚಕ್ಕೆ ಬಳಕೆ

ಭವಿಷ್ಯ ನಿಧಿಮೊತ್ತ ಪಾವತಿಗೆ ಸಂಬಂಧಿಸಿದಂತೆ ಆರ್ಥಿಕ ನೆರವು ನೀಡುವಂತೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಸರ್ಕಾರಕ್ಕೆ ಪತ್ರದ ಮೂಲಕ ಕೋರಿದ್ದಾರೆ. ಈ ಪತ್ರದಲ್ಲಿ ಕೊರೋನಾ ಅವಧಿಯಲ್ಲಿ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಿವೆ. ಅದರ ಜತೆಗೆ ತೈಲ ಬೆಲೆ, ವೇತನ ಹೆಚ್ಚಳದಿಂದಾಗಿ ನಿಗಮಗಳ ವೆಚ್ಚ ಹೆಚ್ಚಳವಾಗುವಂತಾಗಿದೆ. ಅದರ ಪರಿಣಾಮ ನೌಕರರ ಮತ್ತು ನಿಗಮಗಳ ವಂತಿಗೆಯ ಭವಿಷ್ಯ ನಿಧಿ ಮೊತ್ತವನ್ನು ಪಾವತಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆರ್ಥಿಕ ನೆರವು ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಆಯುಕ್ತರ ಆಕ್ಷೇಪ

ಹಲವು ತಿಂಗಳಿನಿಂದ ಭವಿಷ್ಯ ನಿಧಿ ಮೊತ್ತ ಪಾವತಿಸ ಬಾಕಿ ಉಳಿಸಿಕೊಂಡಿದ್ದಕ್ಕಾಗಿ ಭವಿಷ್ಯ ನಿ ಕಚೇರಿಯ ಪ್ರಾದೇಶಿಕ ಆಯುಕ್ತರು ಗಂಭೀ ವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲ ಸಾರಿಗೆ ನಿಗಮಗಳಿಗೆ ನೀಡಲಾಗಿರುವ ಭರ್ವಿ ನಿಧಿ ವಿನಾಯಿತಿಯನ್ನು ರದ್ದು ಮಾಡುವುದ ಗಿಯೂ ಎಚ್ಚರಿಕೆ ನೀಡಿದ್ದಾರೆ. ಹೀಗಾದ ಸಾರಿಗೆ ನಿಗಮಗಳು ಬಿಕ್ಕಟ್ಟಿಗೆ ಸಿಲುಕಲಿದ ಸಾರಿಗೆ ನೌಕರರಿಗೂ ಸಮಸ್ಯೆ ಎದುರಾಗಲಿ ಎಂದು ಅನ್ಸುಕುಮಾ‌ರ್ ಅವರು ಸರ್ಕಾರ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮೊತ್ತ 2,269.09 ಕೋಟಿ ರೂ. ಪಾವತಿಸರ ಬಾಕಿ ಉಳಿಸಿಕೊಂಡಿದ್ದು, ಅದಕ್ಕಾಗಿ ಇದೀ ಸರ್ಕಾರಗಳ ಆಡಳಿತ ಮಂಡಳಿಗಳ ಎಡವಟ್ಟ ನಿರ್ಧಾರದಿಂದಾಗಿ ಕಳೆದೊಂದು ವರ್ಷದಿಂದ ನೌಕರರ ಭವಿಷ್ಯ ನಿಧಿ ಮೊತ್ತ ಪಾವತಿಸ ವಿಳಂಬ ಬಡ್ಡಿ ಸೇರಿದಂತೆ 2,792.61 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments