Homeಕರ್ನಾಟಕಮಂಗನಿಗೆ ಸಾರಾಯಿ ಕುಡಿಸಿದಂಗೆ ಯತ್ನಾಳ ಮಾತು: ಮುರುಗೇಶ ನಿರಾಣಿ ಕಿಡಿ

ಮಂಗನಿಗೆ ಸಾರಾಯಿ ಕುಡಿಸಿದಂಗೆ ಯತ್ನಾಳ ಮಾತು: ಮುರುಗೇಶ ನಿರಾಣಿ ಕಿಡಿ

ಮಾಜಿ ಸಚಿವ ಮುರಿಗೇಶ್‌ ನಿರಾಣಿ ಅವರು ತಮ್ಮದೇ ಪಕ್ಷದ ಶಾಸಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ್ದಾರೆ.

ಬಿ ವೈ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷ ನೇಮಕವಾಗಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸುತ್ತ, “ಮಂಗನಿಗೆ ಸಾರಾಯಿ ಕುಡಿಸಿ, ಅದರ ಬಾಲಕ್ಕೆ ಪಟಾಕಿ ಹಚ್ಚಿದ್ರೆ ಏನಾಗುತ್ತೋ ಆ ರೀತಿ ಹುಚ್ಚರ ತರ ಅವನು ಮಾತನಾಡುತ್ತಾನೆ” ಎಂದು ಹರಿಹಾಯ್ದಿದ್ದಾರೆ.

“ಯತ್ನಾಳ್‌ ಮಾತನಾಡುವ ಸಂಗತಿಗಳಿಗೆ ಜಾಸ್ತಿ ಬೆಲೆ ಇಲ್ಲ. ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಬಿಡಬೇಕು. ಬಿ ಎಸ್‌ ಯಡಿಯೂರಪ್ಪ ಅವರ ಕುಟುಂಬದಿಂದ ಹಿಡಿದು ಯಾರನ್ನು ಅವನು ಉಳಿಸಿಲ್ಲ. ಸ್ವಪಕ್ಷದ ನಾಯಕರ ವಿರುದ್ಧವೇ ನಾಲಿಗೆ ಹರಿಬಿಡುತ್ತಾರೆ” ಎಂದರು.

“ನಾನೇ ಮುಂದಿನ ಮುಖ್ಯಮಂತ್ರಿ, ನಾನೇ ಮುಂದಿನ ರಾಜ್ಯಾಧ್ಯಕ್ಷ ಎಂಬುದು ಅವನ ಸ್ವಘೋಷಣೆ. ಯತ್ನಾಳ್‌ ಹೇಳಿಕೆಯನ್ನು ನಮ್ಮ ರಾಜ್ಯ ನಾಯಕರಾಗಲಿ ಅಥವಾ ರಾಷ್ಟ್ರೀಯ ನಾಯಕರಾಗಲಿ ಗಂಭೀರವಾಗಿ ಪರಿಗಣಿಸಿಲ್ಲ” ಎಂದು ಹೇಳಿದರು.

ಬಿ ವೈ ವಿಜಯೇಂದ್ರ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿ, “ದೀಪಾವಳಿ ಉಡುಗರೆಯಾಗಿ ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಾಕ್ಷ ಸ್ಥಾನ ಲಭಿಸಿದೆ. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಅವರು ಯಶಸ್ಸು ಸಾಧಿಸುತ್ತಾರೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments