Homeಕರ್ನಾಟಕಮಲ್ಲಿಕಾರ್ಜುನ ಖರ್ಗೆ ಸಮಚಿತ್ತ ರಾಜಕಾರಣಿ: ಸಚಿವ ಡಾ.ಶರಣಪ್ರಕಾಶ ಪಾಟೀಲ

ಮಲ್ಲಿಕಾರ್ಜುನ ಖರ್ಗೆ ಸಮಚಿತ್ತ ರಾಜಕಾರಣಿ: ಸಚಿವ ಡಾ.ಶರಣಪ್ರಕಾಶ ಪಾಟೀಲ

ಎಐಸಿಸಿ ಅಧ್ಯಕ್ಷರೂ, ದೇಶದ ಅನುಭವಿ ಹಿರಿಯ ರಾಜಕಾರಣಿಗಳಾದ ಮಲ್ಲಿಕಾರ್ಜುನ ಖರ್ಗೆ ಅವರಾಗಲಿ, ಪ್ರಿಯಾಂಕ್ ಖರ್ಗೆ ಅವರಾಗಲಿ ಅಪರಾಧ ಕೆಲಸ ಮಾಡಿಲ್ಲ, ಸಮಾಜವನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಹೊರತು ಒಡೆಯುವ ಕೆಲಸ ಎಂದೂ ಮಾಡಿಲ್ಲ‌ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಹೇಳಿದರು.

ಕಲಬರಗಿ ನಗರದ ತಮ್ಮ‌ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಇಲ್ಲಿಯವರೆಗೂ ವೈಯಕ್ತಿಕವಾಗಿ ಯಾರನ್ನೂ ಟೀಕೆ ಮಾಡಿಲ್ಲ, ಸಂಘಟನೆ ಬಗ್ಗೆ ಹೇಳಿದ್ದಾರೆ ಎಂದರು.

ವಿಷ ಸರ್ಪವನ್ನು ಹೊಡಿಬೇಕು ಎಂದರೆ ಸೈದ್ದಾಂತಿಕವಾಗಿ ಸಂಘಟನೆಯ ಸಿದ್ಧಾಂತವನ್ನು ವಿರೋಧಿಸಬೇಕನ್ನುವ ಅರ್ಥವಿದೆ. ಯಾರನ್ನು ಯಾರೂ ಸಹ ಹೊಡೆಯುವ ಹಕ್ಕಿಲ್ಲ, ಸಮಾಜಕ್ಕೆ ಮಾರಕವಾದ ಸಿದ್ಧಾಂತಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಹೊಡೆದಾಗಬೇಕೆನ್ನುವ ಅರ್ಥದಲ್ಲಿ ಖರ್ಗೆ ಅವರು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಜೀವನದಲ್ಲಿ ಅತ್ಯಂತ ಪಾರದರ್ಶಕ ವ್ಯಕ್ತಿತ್ವ ಹೊಂದಿದವರು. ಮೇಲಾಗಿ ಎಲ್ಲರನ್ನೂ ಪ್ರೀತಿಯಿಂದ ಕಾಣುವ ನಾಯಕರಾಗಿದ್ದಾರೆ. ಅವರ ಆರು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಖರ್ಗೆ ಸಿದ್ದಾಂತದ ಆಧಾರದ ಮೇಲೆ ರಾಜಕೀಯ ಮಾಡಿದ್ದಾರೆ. ಸಮಾಜದಲ್ಲಿ ಕಲಹ ಉಂಟುಮಾಡುವ ಸ್ಥಿತಿ ಸೃಷ್ಟಿಸಿಲ್ಲ ಎಂದು ಹೇಳಿದರು.

ಗುಜುರಾತಿಗಳ ಹೇಳಿಕೆಯನ್ನು ಬಿಜೆಪಿ ಅವರು ಜನರಲ್ಲಿ ತಪ್ಪು ಅರ್ಥೈಸುತ್ತಿದ್ದಾರೆ. ರಾಜಕಾರಣದಲ್ಲಿ ಆಡು ಭಾಷೆ ಸಹಜ ಆ ರೀತಿಯಲ್ಲಿ ಆಡಿರುವ ಹೇಳಿಕೆಯನ್ನು ಬಿಜೆಪಿಗರು ದೊಡ್ಡ ತಪ್ಪಾಗಿ ಬಿಂಬಿಸಲು ಹೊರಟಿದ್ದಾರೆ ಎಂದು ಡಾ. ಪಾಟೀಲ್‌ ತಿಳಿಸಿದರು.

ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿಗರು ಮನಬಂದಂತೆ ಹೇಳಿಕೆ ನೀಡುವುದನ್ನು ನಾನು‌ ಖಂಡಿಸುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಟೀಕಿಸುವ ಭರದಲ್ಲಿ ರಾಜಕೀಯ ಪ್ರೇರಿತ ಆಪಾದನೆ ಮಾಡುವುದು ಸರಿಯಲ್ಲ. ಹಿಂದೆ ಬಿಜೆಪಿಯವರು ಹಾಗೂ ನರೇಂದ್ರ ಮೋದಿ ಅವರು ಸಹ ಕಾಂಗ್ರೆಸ್ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದಿದ್ದರು. ಬಿಜೆಪಿಗರು ದಿನ ಬೆಳಗಾದರೆ ನೆಹರೂ, ಇಂದಿರಾಗಾಂಧಿ ಅವರನ್ನು ತೇಜೋವಧೆ ಮಾಡುತ್ತಾರೆ. ಬಿಜೆಪಿಗರು ಬೇರೆಯವರ ಬಗ್ಗೆ ಯಾವಾಗಲೂ ಹಗುರವಾಗಿಯೇ ಮಾತಾಡುತ್ತಾರೆ. ಅದೇ ಬಿಜೆಪಿ ಸಂಸ್ಕೃತಿ.

– ಡಾ.ಶರಣಪ್ರಕಾಶ ಪಾಟೀಲ, ಸಚಿವರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments