ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಜೈಲಾಧಿಕಾರಿಗಳಿಗೆ ಟಿವಿ ಒದಗಿಸಿಕೊಟ್ಟಿದ್ದಾರೆ.
ಹೊರ ಜಗತ್ತಿನಲ್ಲಿ ಏನು ನಡೆಯುತ್ತದೆ ಎಂಬುದನ್ನು ಅರಿಯಲು ತನಗೆ ಟಿವಿ ಒದಗಿಸಿಕೊಡುವಂತೆ ಜೈಲಧಿಕಾರಿಗಳು ನಟ ದರ್ಶನ್ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿರುವ ಅಧಿಕಾರಿಗಳು ದರ್ಶನ್ ಬಂಧಿಯಾಗಿರುವ ಸೆಲ್ನಲ್ಲಿ ಟಿವಿ ಅಳವಡಿಸಿದ್ದಾರೆ.
ಜೈಲಿನ ನಿಯಮಾವಳಿಯ ಪ್ರಕಾರ ಖೈದಿಗಳಿಗೆ ಅವರ ಮನವಿಯ ಆಧಾರದ ಮೇಲೆ ಟಿವಿ ಅಳವಡಿಸುವ ವ್ಯವಸ್ಥೆ ಇದೆ. ಆ ಪ್ರಕಾರ ಟಿವಿ ಅಳವಡಿಸಲಾಗಿದೆ. ಎಲ್ಲ ವ್ಯವಸ್ಥೆ ಕಲ್ಪಿಸಲು ದರ್ಶನ್ ಅವರು ಜೈಲಧಿಕಾರಿಯ ಖಾಸಗಿ ಖಾತೆಗೆ 35,000 ರೂ. ಜಮಾ ಮಾಡಿದ್ದಾರೆ.
ಟಿವಿ ಮಾತ್ರವಲ್ಲದೆ ದರ್ಶನ್ ಅವರು “ಜೈಲಿನೊಳಗಿನ ಇಂಡಿಯನ್ ಟಾಯ್ಲೆಟ್ನಲ್ಲಿ ಕೂರಲಾಗುವುದಿಲ್ಲ. ಸರ್ಜಿಕಲ್ ಚೇರ್ ಒದಗಿಸುವಂತೆ” ಮನವಿ ಮಾಡಿದ್ದರು. ಜೊತೆಗೆ ಫೋನ್ ಕಾಲ್ ಮಾಡಲು ಅನುಮತಿ ನೀಡಬೇಕು ಎಂದು ಸಹ ಅವರು ಜೈಲಧಿಕಾರಿಗೆ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿರುವ ಜೈಲು ಅಧಿಕಾರಿಗಳು ಅಗತ್ಯ ವ್ಯವಸ್ಥೆ ಮಾಡಿದ್ದಾರೆ.