Homeಕರ್ನಾಟಕಸಿಲಿಂಡರ್‌ ಸ್ಫೋಟ, 12 ಮನೆ ಹೊಸದಾಗಿ ಕಟ್ಟಿಕೊಡುವೆ: ಸಚಿವ ಜಮೀರ್ ಘೋಷಣೆ

ಸಿಲಿಂಡರ್‌ ಸ್ಫೋಟ, 12 ಮನೆ ಹೊಸದಾಗಿ ಕಟ್ಟಿಕೊಡುವೆ: ಸಚಿವ ಜಮೀರ್ ಘೋಷಣೆ

ಬೆಂಗಳೂರಿನ ಸಿವಿ ರಾಮನ್ ನಗರದ ಸಂಜಯ ನಗರ ಕೊಳಗೇರಿಯಲ್ಲಿ ಸೋಮವಾರ ಬೆಳಗ್ಗೆ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಹಾನಿಯಾದ ಮನೆಗಳನ್ನು ವಸತಿ ಸಚಿವ ಜಮೀರ್ ಅಹಮದ್ ಖಾನ್ ವೀಕ್ಷಿಸಿದರು.

ಘಟನೆಯಿಂದ ಶಿಥಿಲಗೊಂಡಿರುವ 6 ಮನೆ ಒಳಗೊಂಡ ಇಡೀ ಬ್ಲಾಕ್‌ನ 12 ಮನೆಗಳನ್ನು ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ತಮ್ಮ ವಿವೇಚನಾ ನಿಧಿ ಯಿಂದ ಹೊಸದಾಗಿ ಕಟ್ಟಿಕೊಡುವುದಾಗಿ ಸಚಿವರು ಇದೇ ಸಂದರ್ಭದಲ್ಲಿ ಘೋಷಿಸಿದರು.

1994 ರಲ್ಲಿ ಹುಡ್ಕೋ ಅನುದಾನದಡಿ ಇಲ್ಲಿ ನಿರ್ಮಿಸಿ ರುವ 130 ಮನೆಗಳು ಶಿಥಿಲ ಗೊಂಡಿರುವ ಬಗ್ಗೆ ಸ್ಥಳೀಯರು ಮನವಿ ಮಾಡಿಕೊಂಡರು. ಈ ಬಗ್ಗೆ ಮುಖ್ಯಮಂತ್ರಿ ಯವರ ಜತೆ ಚರ್ಚಿಸಿ ಕ್ರಮ ಕೈಗೊಳ್ಳವುದಾಗಿ ಸಚಿವರು ತಿಳಿಸಿದರು.

ನಂತರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಾಯಾಳು ಗಳನ್ನು ಭೇಟಿ ಮಾಡಿ ಉಚಿತ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚಿಸಿ ಅಣ್ಣಾ ದೊರೆ ಎಂಬುವರಿಗೆ 50 ಸಾವಿರ ರೂ. ನೀಡಿದರು. ಇದೇ ಘಟನೆಯಲ್ಲಿ ಎರಡು ದ್ವಿಚಕ್ರ ವಾಹನ ಜಖಂಗೊಂಡಿದ್ದು, ರಿಪೇರಿ ಗಾಗಿ ತಲಾ 25 ಸಾವಿರ ನೀಡಿದರು. ಕಾಂಗ್ರೆಸ್ ಮುಖಂಡ ಆನಂದ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments