Homeಕರ್ನಾಟಕಖಾಲಿ ಟ್ರಂಕ್ ಹಿಡಿದು ಪ್ರಧಾನಿ ಕಚೇರಿಗೆ ಹೋಗುವ ಬದಲು ದಾರಿ ತಪ್ಪಿ ಬೆಂಗಳೂರಿನ ಮೆಟ್ರೋ ಸ್ಟೇಶನ್...

ಖಾಲಿ ಟ್ರಂಕ್ ಹಿಡಿದು ಪ್ರಧಾನಿ ಕಚೇರಿಗೆ ಹೋಗುವ ಬದಲು ದಾರಿ ತಪ್ಪಿ ಬೆಂಗಳೂರಿನ ಮೆಟ್ರೋ ಸ್ಟೇಶನ್ ಬಾಗಿಲಿಗೆ ಬಂದ ಬಿಜೆಪಿ ಸಂಸದರು: ಪ್ರಿಯಾಂಕ್ ಖರ್ಗೆ ಲೇವಡಿ

ಕರ್ನಾಟಕದ ಬಿಜೆಪಿ ಸಂಸದರು ಖಾಲಿ ಟ್ರಂಕ್ ಹಿಡಿದು ಪ್ರಧಾನಿ ಕಚೇರಿಯ ಬಾಗಿಲಿಗೆ ಹೋಗಬೇಕಿತ್ತು, ದಾರಿ ತಪ್ಪಿ ಬೆಂಗಳೂರಿನ ಮೆಟ್ರೋ ಸ್ಟೇಶನ್ ಬಾಗಿಲಿಗೆ ಬಂದಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಸದ ತೇಜಸ್ವಿ ಸೂರ್ಯ ಅವರನ್ನು ಲೇವಡಿ ಮಾಡಿದ್ದಾರೆ.

ಈ ಕುರಿತು ಎಕ್ಸ್ ಖಾತೆಯಲ್ಲಿ ಬರೆದೆಕೊಂಡಿರುವ ಅವರು, “ಖಾಲಿ ಟ್ರಂಕಿನಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ತುಂಬಿಸಿಕೊಂಡು ಬರುವುದಕ್ಕೆ ಸಾಕಷ್ಟು ವಿಷಯಗಳಿವೆ” ಎಂದಿದ್ದಾರೆ.

◆ ಕೇಂದ್ರ ಸರ್ಕಾರ ಭದ್ರ ಮೇಲ್ದಂಡೆ ಯೋಜನೆಯ ಅನುದಾನ.

◆ ಮಹದಾಯಿ ನೀರಾವರಿ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆಯ ಅನುಮತಿ

◆ ಕೃಷ್ಣ ಮೇಲ್ದಂಡೆ 3ನೇ ಹಂತದ ಯೋಜನೆಗೆ ಕೇಂದ್ರದ ಅಧಿಸೂಚನೆ.

◆ 15ನೇ ಹಣಕಾಸು ಆಯೋಗದ ಅನುದಾನ.

◆ ಜಲಜೀವನ್ ಮಿಷನ್ ಯೋಜನೆಯಲ್ಲಿ ಬಾಕಿ ಉಳಿಸಿಕೊಂಡ 13,000 ಕೋಟಿ

◆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ವಿಶೇಷ ಅನುದಾನದ ಮ್ಯಾಚಿಂಗ್ ಗ್ರಾಂಟ್

◆ ನೆರೆ ಮತ್ತು ಬರ ಪರಿಹಾರಗಳ ಬಾಕಿ ಮೊತ್ತ

◆ ಸಬ್ ಅರ್ಬನ್ ರೈಲ್ವೆ ಯೋಜನೆಗೆ ಘೋಷಣೆಯಾಗಿದ್ದ ಅನುದಾನ.

ಬಿಜೆಪಿ ಸಂಸದರು ದೆಹಲಿಗೆ ಖಾಲಿ ಟ್ರಂಕ್ ತೆಗೆದುಕೊಂಡು ಹೋಗಿ, ತುಂಬಿದ ಟ್ರಂಕ್ ನೊಂದಿಗೆ ವಾಪಸ್ ಬರಲಿ, ಆಗ ಇವರು ಸಂಸದರಾಗಿದ್ದಕ್ಕೂ ಅರ್ಥ ಬರಲಿದೆ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments