Homeಕರ್ನಾಟಕನ್ಯಾಯ ಕೇಳಿ ಹೈಕೋರ್ಟ್‌ನಲ್ಲಿ ರೇಜರ್‌ನಿಂದ ಕುತ್ತಿಗೆ ಕತ್ತರಿಸಿಕೊಂಡ ಅನಾಮಿಕ

ನ್ಯಾಯ ಕೇಳಿ ಹೈಕೋರ್ಟ್‌ನಲ್ಲಿ ರೇಜರ್‌ನಿಂದ ಕುತ್ತಿಗೆ ಕತ್ತರಿಸಿಕೊಂಡ ಅನಾಮಿಕ

ಹೈಕೋರ್ಟ್‌ನ ಕೋರ್ಟ್‌ ಹಾಲ್‌ 1ಕ್ಕೆ ಪ್ರವೇಶಿಸಿದ ಅನಾಮಿಕ ವ್ಯಕ್ತಿಯೊಬ್ಬರು ನ್ಯಾಯಕ್ಕಾಗಿ ಮನವಿ ಮಾಡಿ, ರೇಜರ್‌ನಿಂದ ಕುತ್ತಿಗೆ ಕತ್ತರಿಸಿಕೊಂಡ ವಿಲಕ್ಷಣ ಘಟನೆ ಬುಧವಾರ ನಡೆದಿದೆ.

ಮುಖ್ಯ ನ್ಯಾಯಮೂರ್ತಿ ಅನ್‌ ವಿ ಅಂಜಾರಿಯಾ ಮತ್ತು ಡಾ. ನ್ಯಾಯಮೂರ್ತಿ ಎಚ್‌ ಬಿ ಪ್ರಭಾಕರ್‌ ಶಾಸ್ತ್ರಿ ಅವರ ನೇತೃತ್ವದ ಶಿಷ್ಟಾಚಾರದ ವಿಭಾಗೀಯ ಪೀಠದ‌ ಮುಂದೆ ಘಟನೆ ನಡೆದಿದೆ.

ಏಕಾಏಕಿ ಪೀಠದ ಮುಂದೆ ವ್ಯಕ್ತಿಯು ದಾಖಲೆಗಳನ್ನು ನ್ಯಾಯಾಲಯದ ಅಧಿಕಾರಿಗೆ ಸಲ್ಲಿಸಿ, ನನಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದರು. ತಕ್ಷಣ ತಮ್ಮ ಜೇಬಿನಿಂದ ರೇಜರ್‌ ತೆಗೆದು ಕುತ್ತಿಗೆ ಕೊಯ್ಯಲು ಮುಂದಾದರು. ಸುತ್ತಲಿದ್ದ ವಕೀಲರು ಅವರನ್ನು ತಡೆದು, ಪೊಲೀಸರಿಗೆ ಒಪ್ಪಿಸಿದರು.

ರೇಜರ್‌ನಿಂದ ಕತ್ತು ಕೊಯ್ದುಕೊಳ್ಳಲು ಪ್ರಯತ್ನಿಸಿದ ವ್ಯಕ್ತಿಗೆ ಗಂಭೀರ ಗಾಯವಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಪೀಠ ಸ್ಥಳದಲ್ಲಿದ್ದ ವಕೀಲರಿಗೆ “ರೇಜರ್‌ ಮುಟ್ಟಬೇಡಿ. ಸ್ಥಳದ ಪಂಚನಾಮೆ ನಡೆಸಬೇಕಾಗುತ್ತದೆ. ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅವರನ್ನು ಬರ ಹೇಳಿ” ಎಂದರು.

ನ್ಯಾ. ಶಾಸ್ತ್ರಿ ಅವರು “ರೇಜರ್‌ ಹಿಡಿದು ಕೋರ್ಟ್‌ ಹಾಲ್‌ಗೆ ಬರಲು ನಮ್ಮ ಭದ್ರತಾ ಸಿಬ್ಬಂದಿ ಹೇಗೆ ಅನುಮತಿಸಿದರು? ನಮ್ಮಲ್ಲಿ ಭದ್ರತೆ ಅಪಾರವಾಗಿದೆ. ಆದರೂ ಹೇಗೆ ಅವರು ನುಸುಳಿದರು? ರೇಜರ್‌ ಅನ್ನು ಮುಟ್ಟಬೇಡಿ. ಹೈಕೋರ್ಟ್‌ ಪೊಲೀಸರು ಎಲ್ಲಿ ಹೋಗಿದ್ದಾರೆ” ಎಂದು ಪ್ರಶ್ನಿಸಿದರು.

ಸ್ಥಳದಲ್ಲಿದ್ದ ಸರ್ಕಾರದ ಪರ ವಕೀಲ ಎಸ್‌ ಎಸ್‌ ಮಹೇಂದ್ರ ಅವರು “ಪ್ರಕರಣವನ್ನು ವ್ಯಾಪ್ತಿ ಹೊಂದಿದ ಪೊಲೀಸರಿಗೆ ತಿಳಿಸುವುದು ಸೂಕ್ತ” ಎಂದರು. ಇದಕ್ಕೆ ಸಮ್ಮತಿಸಿದ ಪೀಠವು ಸ್ಥಳಕ್ಕೆ ಆಗಮಿಸಿದ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಮಾಹಿತಿ ನೀಡಿದರು. ಅಂತಿಮವಾಗಿ ಕಲಾಪ ಮುಕ್ತಾಯಗೊಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments