ಕಾಂಗ್ರೆಸ್ ಸಾಗರೋತ್ತರ ಘಟಕದ ಅಧ್ಯಕ್ಷರಾಗಿದ್ದ ಸ್ಯಾಮ್ ಪಿತ್ರೋಡ ಹೇಳಿಕೆ ದೇಶವನ್ನು ಛಿದ್ರ ಮಾಡುವ ಹೇಳಿಕೆ. ಡಿ ಕೆ ಸುರೇಶ್ ಅವರ ಹಿನ್ನೆಲೆ ಗಾಯಕ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದರು.
ಬಿಜೆಪಿ ಕಚೇರಿಯಲ್ಲಿ ಗುರುವಾರ ಮಾತನಾಡಿದ ಅವರು, “ದಕ್ಷಿಣ ಭಾರತೀಯರನ್ನು ಆಫ್ರಿಕಾ ಜನರಿಗೆ ಹೋಲಿಕೆ ಮಾಡಿದ ಸ್ಯಾಮ್ ಪಿತ್ರೋಡ 420 ಆಗಿದ್ದಾರೆ. ಅವರು ದೇಶ ವಿಭಜನೆಯ ಮುನ್ನಲೆ ಗಾಯಕರು” ಎಂದು ಕಿಡಿಕಾರಿದರು.
“ಸಿಎಂ ಸಿದ್ದರಾಮಯ್ಯ ಅವರೇ ಯಾವಾಗ ಆಫ್ರಿಕಾಗೆ ಹೋಗುತ್ತಿರಾ? ಕಾಂಗ್ರೆಸ್ ಇದೀಗ ಬಣ್ಣದ ಭಾಗ್ಯವನ್ನು ಕೊಡುತ್ತಿದೆ. ಬಣ್ನದ ಗ್ಯಾರಂಟಿಗಳನ್ನು ಕೊಡುತ್ತಿದೆ. ಬಣ್ಣದ ಜನಾಂಗೀಯ ಗಲಭೆಯನ್ನು ಸಾವಿರಾರು ಜನರು ಪ್ರಾಣ ತೆತ್ತಿದ್ದಾರೆ. ನೆಲ್ಸನ್ ಮಂಡೇಲಾ, ಮಹಾತ್ಮಾ ಗಾಂಧಿಯ ಹೋರಾಟ ಇದಕ್ಕೆ ಅಂತ್ಯ ಹಾಡಿತ್ತು” ಎಂದರು.
“ನಾನು ಭಾರತೀಯನೇ ಅಲ್ಲ ಎಂಬ ಪ್ರಶ್ನೆಯನ್ನು ಸ್ಯಾಮ್ ಪಿತ್ರೋಡ ಎತ್ತಿದ್ದಾರೆ. ನಮಗೆ 5000 ವರ್ಷದ ಇತಿಹಾಸ ಇದೆ. ಹಾಗಿದ್ದರೂ ನಮ್ಮನ್ನು ಆಫ್ರಿಕಾದ ಜನರಿಗೆ ಹೋಲಿಕೆ ಮಾಡಿದ್ದಾರೆ. ಸೋನಿಯಾ ಗಾಂಧಿ ಇಟಲಿಯಿಂದ ಬಂದಿದ್ದರೂ ಅವರನ್ನು ಭಾರತೀಯರು ಎಂದು ಒಪ್ಪಿಕೊಳ್ಳಿ ಎಂದು ಕಾಂಗ್ರೆಸ್ನವರು ಒತ್ತಾಯ ಮಾಡ್ತಾರೆ. ಹಾಗಾದರೆ ಸೋನಿಯಾ ಯಾರು ಎಂದು ಪಿತ್ರೋಡ ಹೇಳಬೇಕು” ಎಂದು ಆಗ್ರಹಿಸಿದರು.
“ಸೋನಿಯಾ ಗಾಂಧಿ ಇಟಲಿಯವರಾದರೂ ನಾನು ಅವರನ್ನು ಭಾರತೀಯ ಸೊಸೆ ಎಂದು ಒಪ್ಪಿಕೊಂಡಿದ್ದೇವೆ. ರಾಹುಲ್ ಗಾಂಧಿ ಈ ಚುನಾವಣೆಯ ಬಳಿಕ ಇಟಲಿಗೆ ಹೋಗುತ್ತಾರೆ ಎಂದು ಗೊತ್ತಿದ್ದರೂ ನಾವು ಅವರನ್ನು ಭಾರತೀಯರು ಎಂದು ಒಪ್ಪಿಕೊಂಡಿದ್ದೇವೆ ಅಲ್ವಾ?” ಎಂದರು.